Tuesday, July 21, 2015

ವ್ಯಥೆ...



ಬೀಳು ಬಿಟ್ಟಿದೆ
ಮನಸಿನ ತುಂಬ 75ರ 
 ಹರೆಯದ ಅಸಿ ನಿದ್ದೆ. ....
 
ಒಣಕಲು ಮರದ   
ರೆಂಬೆಯ ತುದಿಯಲಿ
 ಬಣ್ಣ ಬಣ್ಣದ ದಾರವ ಕಟ್ಟಿ  
 ಪ್ರಶ್ನೆಗಳಿಲ್ಲದ
ಉತ್ತರದಾಳೆಯ ಹಾರವ,
ನೇಣಿಗೆ ಹಾಕಿ..
ಭೂತದ ಕನಸನ್ನ ತಟ್ಟಿ
ತಪ್ತ ಬದುಕಿನ ಕಂದಕವ
 - ಕುಣಿಕೆಗೆ ಹಾಕಿ
ಕುಟ್ಟುತಿದ್ದಾಳೆ - ಮುದುಕಿ 
ಹರಿದ ಭಾವನೆಯ ತುದಿ ಇಡಿದು    
ನಿರರ್ಥಕ ಕಲ್ಪನೆಯ ಸಾಲನ್ನು ನೆನೆದು 
ಕೃಷ್ಣ, ಗೋವಿಂದ ಎಂದು
ಪಟಪಟ ಜಪಿಸುತ್ತಿದ್ದಾಳೆ  
ಸುಪ್ತ ಪ್ರಪಂಚದ ಅಮಾನವೀಯತೆಗೆ.. 
ಸರ್ವಸ್ವಾತಂತ್ರದ ಪಾರಮಾರ್ಥಕತೆಗೆ..
ಜೀವನದುದ್ದಕ್ಕು ಉಂಡ
ಗೊಂದಲದ ಖಾರ್ಮೋಡಗಳ                
                 -  ವ್ಯಥೆಗೆ....          
     
                           ಕಿರಣ್ ಆತ್ರೇಯ





















No comments:

Post a Comment