ರೋಡಿನಲ್ಲೆ ಪಕ್ಕದಲ್ಲೆ
ಕಾರ್ಖಾನೆಗಳಿಂದ
ಉಗಿಯುತ್ತಿದ್ದ ಹಬೆಯಲ್ಲೆ
ಚಿಕ್ಕ ಚಿಕ್ಕ ಶೋಗಿಟ್ಟಿದ್ದ
ಪ್ಲಾಸ್ಟಿಕ್ ಗಿಡಗಳ ಜೊತೆ
ಪುಟ್ಟ ಕಂದಮ್ಮ
ಆಯಾಗಿ ಆಟ ಆಡುವಾಗ..
ಬಾರಿ ಗಾತ್ರದ ವಾಹನಗಳು
ಉಗಿಯುತ್ತಿರುವ ಹೊಗೆಯಲ್ಲೆ
ದೂಳಿಡಿದು ಕೂತ
ಮುದುಕಿಯು ಹಳೆಯದನ್ನ
ಮೆಲುಕು ಹಾಕುವಾಗ
ಹೊಸತು ಹಳೆಯದನ್ನ
ಕಂಡಾಗ
ನನ್ನ ಕವಿತೆಗೆ
ದೂಳಿಡಿಯಿತು..
ನಿಶ್ಕ್ರಿಯನಾದ ಕವಿ
ಜಗತ್ತನ್ನ ಮರೆತು
ಮತ್ತೊಮ್ಮೆ ಬರೆಯಲು
ಆರಂಭಿಸಿದಾಗ
ಮತ್ತೆ ಮತ್ತೆ
ಕವಿತೆಗಳಿಗೆ
ದೂಳಿಡಿಯಿತು....
ಕಿರಣ್ ಆತ್ರೇಯ..
No comments:
Post a Comment