Thursday, June 29, 2017

ಪರಿಸರದ ಅಧ್ಯಾಯ...

ಕೆಲಸವಿಲ್ಲದೆ ಊರಿಗೆ ಬಂದ ಗುಂಡ
ಜಾಗತಿಕ ತಾಪಮಾನ ಏರಿತ್ತು
ಗುಂಡನ ನೆತ್ತಿಯ ಮೇಲು ಕೋಪವಿತ್ತು..
ಅಷ್ಟು ಇಷ್ಟು ಕೂಡಿಟ್ಟ ದುಡ್ಡನ್ನ ಗಂಟಿಕ್ಕಿದ
ಹೊರಟೇ ಬಿಟ್ಟ ಕೃಷಿ ವಿಧ್ಯಾಲಯದ ಕಡೆಗೆ
ಮರ ಗಿಡಗಳಲ್ಲಿ ಅದೆಷ್ಟು ಬಗೆ
ಎಲ್ಲಾ ಬಗೆಯ ಬೀಜಗಳನ್ನ ಆರಿಸಿಕೊಂಡ.
ಒಂದಷ್ಟು ಕವರ್ಗಳೊಂದಿಗೆ
ಊರಿಗೆ ಬಂದೇ ಬಿಟ್ಟ..

ಭೂತಾಯಿ ಎಷ್ಟು ಬೇಕಾದರೂ
ಕೊಡುವಳು ಪ್ರೀತಿ.
ಬಗೆಬಗೆಯ ಖಾಧ್ಯಗಳನ್ನ
ತಾಯಿ  ಮನೆ ಮಂದಿಗೆಲ್ಲಾ
ಬೇಸಾಕುವ ರೀತಿ...
ಕವರ್ ಗಳಿಗೆ ಮಣ್ಣು ತುಂಬಿದ
ಬೀಜವನ್ನ ಹೂಣಿದ, ನೀರನ್ನ ಬಡಿಸಿದ
ದಿನಗಳು ಕಳೆದಂತೆ
ಶಿವನ ಶಾಂತ ಕಣ್ಣು ಬಿಟ್ಟಂತೆ
ಹಸಿರಿನ ಬುಗ್ಗೆ ಗಿಡವಾಗಿ
ಕವರ್ನಲ್ಲಿ ಬೆಳೆದೇ ಬಿಟ್ಟಿತು..
ಗುದ್ದಲಿ ಸಲಾಕೆ ಇಡಿದ
ಹಳ್ಳಿಯ ಸುತ್ತ ಬರುಡಾಗಿದನ್ನ ನೋಡಿದ
ಗಿಡ ನೆಡುವ ಕಾಮಗಾರಿಯನ್ನ
ಆರಂಭಿಸಿಯೇ  ಬಿಟ್ಟ. ..
ಹಳ್ಳಿ ಮಂದಿ ನೋಡಿದರು
ಬೇರೇ ಕ್ಯಾಮೆ ಇಲ್ಲ ಎಂದು ಜರಿದರು..

ದಿನಗಳು ಉರುಳಿದಂತೆ
ಬರುಡಾಗಿದ್ದ ನೆಲದಲ್ಲಿ
ಮರ ಗಿಡಗಳು ದಾಂಪತ್ಯ ನೆಡೆಸಿದವು
ಹಚ್ಚ ಹಸಿರಿನಿಂದ ಸ್ವರ್ಗವಾಯಿತು ಹಳ್ಳಿ..
ಜರಿದ ಮಂದಿ ಗುಂಡನ
ಕೆಲಸವನ್ನ ಒಪ್ಪಿಕೊಂಡರು
ಹಾಗೆ ಅಪ್ಪಿಕೊಂಡರು...

(ಇಲ್ಲಿಗೆ ಅಧ್ಯಾಯ ಸಮಾಪ್ತಿ
ಕೇಳಿದವರಿಗೆ ಓದಿದವರಿಗೆ
ಗಿಡ ನೆಡುವ ಬುದ್ಧಿ ಬರಲಿ
ಎಲ್ಲಾ ಕಡೆ ಹಸಿರು ಬೆಳೆಯಲಿ
ಕಾಲಕಾಲಕ್ಕೆ ಮಳೆಯಾಗಲಿ
ಬೆಳೆಯ ಬೆಳೆವ ರೈತ ಸುಖವಾಗಿರಲಿ
ಜೈ ಪ್ರಕೃತಿ ಮಾತೆ..)

                  Kiran Athrey

Tuesday, June 20, 2017

ನೀನೇ...

 

ನಿನ್ನಂತೆ ನಟಿಸುವೆನು 
          ಒಮ್ಮೊಮ್ಮೆ
ನೀನ್ನನ್ನೆ ಅನುಕರಿಸುವೆ
           ಮತ್ತೊಮ್ಮೆ..
ನೀ ನುಡಿದದ್ದೆಲ್ಲವು
ಕೊರೆವ ಚಳಿಯಲೂ
  ಹೃದಯದಲ್ಲಿ ಬೆಚ್ಚಗೆ
          ಹಸಿರಾಗಿದೆ..
ಕಳೆದ ಕ್ಷಣಗಳು ನೆನಪಾಗಿ 
   ಸದಾ ಅರಳುತಿದೆ..
ದೇಹ ಬಾಡ ಬಹುದು
   ಉಸಿರು ನಿಲ್ಲ ಬಹುದು..
ಹುಟ್ಟುವ ನೆನಪಿಗೆ
    ಮತ್ತೆ ಮತ್ತೆ ಆಯುಷ್ಯ
   ಹೆಚ್ಚುತಿದೆ..

         

Saturday, May 20, 2017

#ಕನ್ನಡಿಗರೇ ನಮಗಿದು ದೊಡ್ಡ ಸವಾಲ್..

#ಕನ್ನಡಿಗರೇ ನಮಗಿದು ದೊಡ್ಡ #ಸವಾಲ್...!!!
   ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಕನ್ನಡಕ್ಕೆ ಬಂದಿದ್ದು ಸರಸ್ವತಿ  ಪುತ್ರರಿಗೆ ಏನು ಬರ ಇಲ್ಲ. . ಓದೋ ಅಭ್ಯಾಸ ಕಮ್ಮಿ ಆಗ್ತಾ ಇರೋ ಈ ಕಾಲದಲ್ಲಿ..
   ಒಂದು ಭಾಷೆ, ನಾಡು, ಸಂಸ್ಕೃತಿ, ಅಲ್ಲಿನ ಸೃಜನಶೀಲತೆ ಯನ್ನ ಹೆಚ್ಚು ಪ್ರತಿಬಿಂಬುಸ್ತಾ ಇರೋದು ಚಿತ್ರರಂಗ.. ನಾಡು ನುಡಿ ಯನ್ನು ಹೆಮ್ಮೆಯಿಂದ ಮೆರುಸ್ತಾ ಇರೊರು ಕಲಾವಿದರು.. ಆದರೆ ನಾವುಗಳು ಕಲಾವಿದರನ್ನ ಕಲಾವಿದರಾಗಿ ನೋಡದೇ ಇವ ನಮ್ಮ ಹೀರೋ,  ಅವ ನಿಮ್ಮ ಹೀರೋ ಇವನೇ great ಅವನು ನಾಲಾಯಕ್ ಈ ರೀತಿ ನಮ್ಮಲ್ಲೆ ನಾವು  ದ್ವೇಷವನ್ನ ಮಾಡ್ಕೋಳೋದು ನಿಜಕ್ಕೂ ನಾಚಿಕೆಗೇಡು..
      ಕಲಾವಿದರನ್ನ ಅವರ ಪ್ರತಿಭೆ ಇಂದ ಗುರುತಿಸೋದಕ್ಕಿಂತ ನಾವೇ ಪಕ್ಷವನ್ನಾಗಿ ಮಾಡ್ಕೋಂಡಿರೋದು ವಿಷಾದನೀಯ ಸಂಗತಿ.. ಬೇರೆ ಭಾಷೆಯ cinemaಗಳ ಅನುಕರಣೇಗಿಂತ ಹೆಚ್ಚು ಅವಶ್ಯಕತೆ ಇರೋದು ನಮ್ಮಲ್ಲಿನ ಸೃಜನಶೀಲತೆ ಯನ್ನ ಪ್ರದರ್ಶಿಸುವುದು.. ಜೊತೆಗೆ ಪೂರ್ವಪೂರ್ವಾಗ್ರಹ ಪೀಡಿತರಾಗದೇ ಪ್ರತಿಭೆ ಇರೋರನ್ನ ಮನಸ್ಪೂರ್ವಕವಾಗಿ ಒಪ್ಕೋಳ್ಳೋದು ನಮ್ಮ ಕರ್ತವ್ಯ ನು ಕೂಡ ಆಗಬೇಕಿದೆ... ಇಲ್ಲ ಅಂದರೆ 30 ವರ್ಷಗಳ ನಂತರ ಪ್ರತಿಭೆಯನ್ನ ಗುರುತಿಸೋ ಕಡೆ ಪ್ರತಿಭೆಗಳು ಮೆರೆಯುತ್ತೆ. ಮತ್ತೆ ಆಗ ನಾವು ಕನ್ನಡಿಗರಾಗಿ ಹುಟ್ಟಿ ಬೇರೆ ಭಾಷಿಗ ಅಂತ ಹೇಳ್ದಾಗ ಕನ್ನಡಿಗರಿಗೇ ಸ್ವಲ್ಪ acidity ಜಾಸ್ತಿ ಆಗುತ್ತೆ... ನಮ್ಮ ಭಾಷೆಯ ಕಲಾವಿದರನ್ನ ಪೂರ್ವಾಗ್ರಹ ಪೀಡಿತ ರಾಗದೆ ಪ್ರೀತಿಸೋದು ನಿಜಕ್ಕೂ ನಮಗೆ ದೊಡ್ಡ ಸವಾಲ್....!!!

                                   Kiran Athrey

Friday, April 14, 2017

Wanting the love of Divine..!!


Wanting the love of Divine..!!

The flower basking
In the field
To find her love with sun
But it would be fed-up in few hours..

The honey-Bee singing their
eternal song in  the flower ear
With chorus of gentle breeze..

Is it only a lust..?
Or
Is that blindness of love..?

But
The poet still searching,
wanting the love of divine
in permanent...
  
                         - Kiran Athrey

Tuesday, November 29, 2016

ಶಿವನ ಕೃಪೆ ಇರಲಿ...

ಶಿವನ ಕೃಪೆ ಇರಲಿ...

ಅ ಆ ಇ ಈ ಹೇಳಿಕೊಟ್ಟ ಅಮ್ಮ ಸುಮ್ಮನಾದಳು
ವ್ಯಾಕರಣ ಕಲಿಸಿದ ಮೇಸ್ತ್ರು ಈಗ ಅಜ್ಜ ಆಗಿರಬಹುದು..!!
ಬದುಕಲ್ಲಿ ಏನಿಲ್ಲ.! ಎಂದ ಅಪ್ಪ,
ಅವರವರ ಕರ್ಮಕ್ಕೆ ಎಷ್ಟೆಂದು ಪಾಲು ಲೆಕ್ಕ ಹಾಕಿಯಾನೇ ಆ ಭಗವಂತ..

ಕೆಟ್ಟ ಕುಂಟ ನೆಪ, ಪೋಲಿತನದ ಮಾತು, ಆಟಗಳನ್ನು
ಒಳ್ಳೆಯದೆಂದೇ  ಉದ್ಘೋಷಿಸಿದ
ಸ್ನೇಹಿತ ಮಹಾನುಭಾವಿಗಳು..
ಎಲ್ಲದಕ್ಕೂ ಹಣೆಗೆ ಕಪ್ಪುಹಲಗೆ ಹಾಕಿ
ತಪ್ಪು ಎಂದು ಗೀಚುವ ಮನೆಮಂದಿ ಊರಿನವರು..

ದಾರಿಯಲ್ಲಿ ಹೋಗುವಾಗ ಬುದ್ಧಿ ಹಾಳಾಗೋತನಕ ಮಂಡೆ
ಬಿಸಿಮಾಡುವ ಆ ಸೂರ್ಯನಿಗೆ ಕಂಬಳಿ ಒದ್ದಿಸಿ,
ಕತ್ತಲಲ್ಲೆ ಟಾರ್ಚು ಇಡಿದು
ಬರೆದು ಬರೆದು ಬೆರಳುಗಳಿಗೆ ಜೋಂಪಿಡಿದಾಗ
ಕಣ್ಣುಗಳು ಪಿಳಿ ಪಿಳಿ ಕೆಂಪಾಗಿ ಅರಳಿದಾಗ
ಕಂಬಳಿ ತೆಗೆದು ಸೂರ್ಯನ ನೆತ್ತಿಗೆ ತಣ್ಣೀರು
ಹಾಕೋ ಬದುಕಿಗೆ ಏನೆನ್ನ ಬಹುದು...?

ಎರಡೇ ದಿನ ಮಾಡಿ ಕೆಲಸವನ್ನ ಬದಲಿಸುತ್ತಿದ್ದ
ರಸ್ತೆಯ ಕೊನೆಯ ಮನೆಯವ.
ನಾ ಹೇಳೇ ಬಿಟ್ಟೆ
ಕಟ್ಟಕಡೆಯದಾಗಿ ಮಾಡುತ್ತಿರುವ ಕೆಲಸದಲ್ಲೇ
ಜೀವನವನ್ನ ರೂಪಿಸಿಕೊಳ್ಳುತ್ತೇನೆ..
ತಿಂಗಳಾನುಗಟ್ಲೆ ನನ್ನ ಜುಟ್ಟು, ಜನಿವಾರನ
ಬಾಂಡಲಿಯಲಿ ಹಾಕಿ ಕೆಂಪಾಗಿ ಉರಿದು,
ಅಷ್ಟೋ ಇಷ್ಟೋ ಒಗ್ಗರಣೆ ಹಾಕಿ ಮುಕ್ಕುವವರಿಗೆ ಕೊಟ್ಟು
ಬರೋ ಸಂಬಳದಲ್ಲೇ ನನ್ನ ಜೀವನ
ನನ್ನ ನಂಬಿದವರ ಉದರ ಪೋಷಣೆ...

ಎಷ್ಟೊಂದು ಕನಸುಗಳಿದ್ದವು
ಈ ಪುಟ್ಟ ಕಣ್ಣುಗಳ ತುಂಬ..
ಎಲ್ಲವನ್ನೂ ಮರೆಸಿತೆ
ಈ ವಾಸ್ತವತೆಯ ಬಿಂಬ..

ಅಬ್ಬಬ್ಬ ಎಂದರೆ ಎಷ್ಟು ದಿನ
ಕೇವಲ ವರ್ಷಾನುಗಟ್ಟಲೆ
ಇಲ್ಲ ತಿಂಗಳು ಗಟ್ಟಲೆ
ಹಿರಿದಾದ ರಸ್ತೆಗಳು ಕಿರಿದಾಗಿ
ಮುಖದ ಮೇಲೆ ಹರಿದು
ಚರ್ಮವನ್ನ ಸುಕ್ಕುಗೆಡಿಸೋ ತನಕ..
ಮತ್ತೊಬ್ಬರ ಪಾಲಿಗೆ ಕಥೆಯಾಗುವ ತನಕ..

ಈ ಬದುಕು ಸಾಗುತಿರಲಿ..
ವಾಸ್ತವತೆಯ ಭೂತ ಕನಸುಗಳನ್ನು ನಂದಿಸದಿರಲಿ..
ಜೊತೆಗೆ ಶಿವನ ಕೃಪೆ ಇರಲಿ...

                          ಕಿರಣ್ ಆತ್ರೇಯ್...

Friday, July 8, 2016

Love

just I wss acting like a krishn
        In the stage of world..
she wsss watching me
        Like a moon of Serenity at ease...
   
                              kiranAthrey..

Wednesday, June 22, 2016

Just remember me....




  O my dear love..
   just remember me..
     When you be in sad,
  How I shivered in front of you

     when i met you at first time,
          Which makes you smile...
            Then forget me....

Just remember me
     When you be in angry,
 What I cracked unlaughable jokes

     when i was with you,
          Which feels you joy..
            Then forget me.

Just remember me
     When you be alone,
 How I pretended like friend of you

     when i wore mask of silence,
          Which intrudes you pessimism
            Then forgive me..

Just remember me
      When you get disgust about  life,
How I still live in memories of you
      Which makes you fright
          Please...please...please
            Then don't forget me..

                            Kiran Athrey...

A Human...

  


Just ask yourself once,
  Who are you..?
Just understand once,
What to give people
       Who  Believes you..?
Eventually,
      you will be a human...
                        Kiran Athrey...

Tuesday, April 5, 2016

A Madrigal

O my love…
O my angel..

Don’t go anywhere from me..
Stay then here forever with me…
Don’t show your crabbed eye
Upon my life…

Please confer me, be as moon eye
Then blow a gentle breeze
on my life…

My blood flows nimble..
Singing your name like humble…
My vein always remember your blee..
By your presence, my heart always glee…

O my love..
O my angel..
Don’t go anywhere from me..
Please stay always with in me…
                                            Kiran Atreya.