Sunday, September 6, 2015

.......

ಗೆಳತಿ..,
ಇಪ್ಪತ್ತೈದು ಕಳೆದೇ
ಹೋಯಿತು.
ನನ್ನ ಅಸ್ತಿತ್ವವಕ್ಕೆ..
ನಿತ್ಯ ಬದುಕೇ
ಕನಸಾಯಿತು.
ಈಗಿನ ವರ್ತಮಾನಕ್ಕೆ..

ನಾಳೆಯ ನಿತ್ಯ ನೂತನಕ್ಕೆ
ಇಂದೇ ಬರೆಯಬೇಕು ಭಾಷ್ಯ...
ನಾವು ಅಂದುಕೊಂಡದ್ದು
ಆಗದಿರುವುದೇ ಮುಂದಿನ ಭವಿಷ್ಯ...

ಕಷ್ಟದ ನಂತರ
ಸುಖ ಸಾಮಾನ್ಯ..
ಗೆಲುವಿನ ನಂತರದ
ಸೋಲು ಅದಮ್ಯ. .

ಸಮುದ್ರ ಮಂಥನದಲ್ಲಿ
ವಾಸುಕಿಯ ನರಳಿನಾಕ್ರೋಷದಲ್ಲಿ.
ವಿಷವೇ ಆದದ್ದು ಅಮೃತ...
ಜೀವನ ಜಾತ್ರೆಯಲ್ಲಿ
ದೇಹನ ಮೆರವಣಿಗೆಯಲ್ಲಿ
ನಂಬಿಕೆಯೇ ಉಸಿರಾಗಬೇಕು
                 ಅನವರತ...

ಈ ಸುಖದುಃಖದಲಿ
ನನ್ನ ಅಸ್ತಿತ್ವವಕ್ಕೆ.
ನನ್ನ ಉದರ ನಿಮಿತ್ತಕ್ಕೆ..
ನಿತ್ಯ ಕರ್ಮಾನುಷ್ಟಾನವೊಂದೇ..
ಅದು ಶ್ರದ್ಧೆಯಲಿ, ಬದ್ಧತೆಯಲಿ,
ಇಲ್ಲ ನಿನ್ನ ಆಗಮನದ
                      ನಿರೀಕ್ಷೆಯಲಿ...
  
                       ಕಿರಣ್ ಆತ್ರೇಯ್....

No comments:

Post a Comment