ಗೆಳತಿ..,
ಇಪ್ಪತ್ತೈದು ಕಳೆದೇ
ಹೋಯಿತು.
ನನ್ನ ಅಸ್ತಿತ್ವವಕ್ಕೆ..
ನಿತ್ಯ ಬದುಕೇ
ಕನಸಾಯಿತು.
ಈಗಿನ ವರ್ತಮಾನಕ್ಕೆ..
ನಾಳೆಯ ನಿತ್ಯ ನೂತನಕ್ಕೆ
ಇಂದೇ ಬರೆಯಬೇಕು ಭಾಷ್ಯ...
ನಾವು ಅಂದುಕೊಂಡದ್ದು
ಆಗದಿರುವುದೇ ಮುಂದಿನ ಭವಿಷ್ಯ...
ಕಷ್ಟದ ನಂತರ
ಸುಖ ಸಾಮಾನ್ಯ..
ಗೆಲುವಿನ ನಂತರದ
ಸೋಲು ಅದಮ್ಯ. .
ಸಮುದ್ರ ಮಂಥನದಲ್ಲಿ
ವಾಸುಕಿಯ ನರಳಿನಾಕ್ರೋಷದಲ್ಲಿ.
ವಿಷವೇ ಆದದ್ದು ಅಮೃತ...
ಜೀವನ ಜಾತ್ರೆಯಲ್ಲಿ
ದೇಹನ ಮೆರವಣಿಗೆಯಲ್ಲಿ
ನಂಬಿಕೆಯೇ ಉಸಿರಾಗಬೇಕು
ಅನವರತ...
ಈ ಸುಖದುಃಖದಲಿ
ನನ್ನ ಅಸ್ತಿತ್ವವಕ್ಕೆ.
ನನ್ನ ಉದರ ನಿಮಿತ್ತಕ್ಕೆ..
ನಿತ್ಯ ಕರ್ಮಾನುಷ್ಟಾನವೊಂದೇ..
ಅದು ಶ್ರದ್ಧೆಯಲಿ, ಬದ್ಧತೆಯಲಿ,
ಇಲ್ಲ ನಿನ್ನ ಆಗಮನದ
ನಿರೀಕ್ಷೆಯಲಿ...
ಕಿರಣ್ ಆತ್ರೇಯ್....
No comments:
Post a Comment